ಎಂದು ಬರುವಳೋ ನನ್ನ ಹುಡುಗಿ
ಎನ್ನ ಮನಸೂರೆಗೊಂಡ ಬೆಡಗಿ
ಮನೆ ಮನಗಳ ಬರಿದು ಮಾಡಿ
ವಿರಹದ ಉರಿಗೆನ್ನ ದೂಡಿ
ಬೆಂದು ಬಸವಳಿದೆನ್ನ ನೋಡಿ
ನಗುತಿರುವಳು ದೂರ ಓಡಿ
ಎಂದು ಬರುವಳೋ…
ಮೃದು ಮಧುರ ಸ್ವರ ಸವಿ ಜೇನಿನ ಅಧರ
ಬಳೆಗಳ ಸಂಚಾರ, ಬಿಂಕ ಬಿನ್ನಾಣದ ವೈಯ್ಯಾರ
ಬಳುಕಿ ನಡೆವ ಕಾಲ್ಗಳ ನೂಪುರದಿಂಚರ
ಸೀರೆಯ ನೆರಿ ಚಿಮುಕಿಸಿ ನಡೆವ ಶೃಂಗಾರ
ಎಂದು ಬರುವಳೋ…
ಸೊಂಟದ ಬಳುಕಾಟ
ಕಣ್ಸನ್ನೆಯಲಿ ಕರೆವ ಮೈಮಾಟ
ಜಿಂಕೆಯ ಚಿನ್ನಾಟ ನವಿಲಿನ ನಡೆದಾಟ
ಕುಲುಕುಲು ನಗುವ ಚೆಂದುಟಿಗಳ ರಸದೂಟ
ಎಂದು ಬರುವಳೋ…
ಮುಚ್ಚಿದ ಕದವ ತೆಗೆಯುವರಿಲ್ಲ
ದೀಪ ಹಚ್ಚುವವರಿಲ್ಲ
ಬಾ ಎಂದು ಕರೆದು ಆದರಿಸುವವರಿಲ್ಲ
ಅತ್ತಿತ್ತ ಹೊರಳಿದರೂ ನಿದ್ದೆಯಿಲ್ಲ
ಕನಸಲ್ಲೂ ಬಿಡದೆ ಕಾಡುವ ರೂಪಸಿ
ಮನದ ಮೂಲೆಯ ತಿಣುಕಿ ಕೆಣಕುವ ಊರ್ವಶಿ
ಎಂದು ಬರುವಳೋ ನನ್ನಾಕೆ
ಎನ್ನ ಹೃದಯವ ಕದ್ದಾಕೆ.
*****
Related Post
ಸಣ್ಣ ಕತೆ
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ಯಾರು ಹೊಣೆ?
"ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…
-
ತನ್ನೊಳಗಣ ಕಿಚ್ಚು
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…